ಮಂಗಳವಾರ, ಡಿಸೆಂಬರ್ 22, 2015

ಪ್ರವಾಸ 2015ರ ಸಂಭ್ರಮದ ಕ್ಷಣಗಳು


          ಕೂಟದ ವತಿಯಿಂದ 2015 ರ ಈ ವರ್ಷದಲ್ಲಿ ದಿನಾಂಕ :   29-11-2015    ಭಾನುವಾರ ಒಂದು ದಿನದ ಪ್ರವಾಸವನ್ನು ಅರಸೀಕೆರೆ- (Malekal )ಚಿಕ್ಕ ತಿರುಪತಿ- -ಹಾರನಹಳ್ಳಿ- -ಜಾವಗಲ್ -ಬೆಳವಾಡಿ ಸ್ಥಳಗಳಿಗೆ ಏರ್ಪಡಿಸಲಾಗಿತ್ತು.


  ಬೆಂಗಳೂರು-ಮೈಸೂರಿನಿಂದ ಹೊರಟ ಸದಸ್ಯರು 10 ಗಂಟೆಗೆ ಅರಸೀಕೆರೆ ತಲುಪಿದರು. ಕಾಫಿ-ತಿಂಡಿಯ ನಂತರ ಚಿಕ್ಕತಿರುಪತಿ,ಶ್ರೀವೆಂಕಟರಮಣ, ಶ್ರೀಚಂದ್ರಮೌಳೇಶ್ವರ ದೇವಾಲಯಗಳನ್ನು ನೋಡಿ, ಅಲ್ಲಿಂದ 60ಕಿ. ಮೀ ದೂರದ ಬೆಳವಾಡಿಯಲ್ಲಿರುವ ಶ್ರೀ ವೀರನಾರಾಯಣ, ಶ್ರೀ ಕೃಷ್ಣ, ಶ್ರೀ ನರಸಿಂಹ ದೇವರುಗಳ ದರ್ಶನ ಪಡೆದರು.ಹಾಗೂ ಈ ಅದ್ಭುತ ದೇವಾಲಯವನ್ನು ಕಣ್ತುಂಬಿಕೊಂಡರು. ಅರ್ಚನೆ- ಪೂಜೆಗಳನ್ನು ಮಾಡಿಸಿದರು. ನಂತರ ಜಾವಗಲ್ ನಲ್ಲಿ  ಶ್ರೀ ನರಸಿಂಹ , ಶ್ರೀ ಲಕ್ಷ್ಮಿ ಯರನ್ನು ದರ್ಶನ ಮಾಡಿದರು. ಸ್ತ್ರೀ ಸದಸ್ಯರು ದೇವಿ ಮಹಿಮೆಯ ಹಾಡುಗಳನ್ನು ಹಾಡಿ ಭಕ್ತಿ ಮೆರೆದರು.ಅಲ್ಲಿ ಊಟದ ನಂತರ 40 ಕಿಮೀ ದೂರದ ಹಾರನಹಳ್ಳಿಯಲ್ಲಿರುವ ಶ್ರೀ ಕೇಶವ, ಶ್ರೀ ನರಸಿಂಹ ದೇವರುಗಳ ದೇವಾಲಯವನ್ನು ಸಂದರ್ಶಿಸಿ ಪ್ರವಾಸವನ್ನು ಸಂಜೆ 5.15 ರ ವೇಳೆಗೆ ಮುಗಿಸಿ ಯಶಸ್ವಿಗೊಳಿಸಲಾಯಿತು.
     ಪ್ರವಾಸದ ನಡುವೆ ಸದಸ್ಯರುಗಳು ಮನೆಯಿಂದ ತಂದಿದ್ದ ಕುರುಕಲು ತಿಂಡಿಗಳನ್ನು ಪರಸ್ಪರ ನೀಡಿ ಸಂತಸಪಟ್ಟರು. ನಂತರ ಎಲ್ಲರೂ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು. ಹಿಂತಿರುಗುವಾಗ ಇಡೀ ಪ್ರವಾಸದಲ್ಲಿ ಕು. ಸಿರಿಯವರು ಎಲ್ಲರನ್ನು ತನ್ನ ಮುದ್ದುಮಾತುಗಳಿಂದ ಮಂತ್ರಮುಗ್ಧಗೊಳಿಸಿ ರಂಜಿಸುತ್ತಿದ್ದುದು ಚೇತೋಹಾರಿಯಾಗಿತ್ತು.


















 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ