ಮಂಗಳವಾರ, ಆಗಸ್ಟ್ 2, 2016

ಕೆಲವು ಶುಭ ಸಮಾಚಾರಗಳು

ಕೆಲವು ಶುಭ ಸಮಾಚಾರಗಳು.......
  ಶಿವರಾತ್ರಿಯ ನಂತರ ಬ್ಲಾಗಿನಲ್ಲಿ ಏನೂ ಕಾಣಿಸಿಕೊಳ್ಳಲಿಲ್ಲ. ಬಹುಷ: ಜಾಗರಣೆಯ ಪ್ರಭಾವವಿರಬೇಕು!!!, 
ಈ ನಡುವೆ ಶ್ರೀ ಕೃಷ್ಣಮೂರ್ತಿಯವರ ಹೊಸಮನೆ ಗೃಹಪ್ರವೇಶ,  
ಶ್ರೀ ಗುರುರಾಜ್ ರವರ ಮದುವೆ,
ಶ್ರೀ ಗೋವಿಂದರಾವ್ ರವರ ಮನೆಯಲ್ಲಿ 2ನೇ ಪುಟಾಣಿ ಮೊಮ್ಮಗನ ಕಲರವ,
ಶ್ರೀ ಬಿ. ಕೆ. ರಮೇಶ್ ರವರ ಪುತ್ರ ಕು.ಅನಿಲ್ ಕಶ್ಯಪ್  ಐ ಸಿ ಎಸ್ ಸಿ 10ನೇತರಗತಿ ಯಲ್ಲಿ ಶೇ 90 ಅಂಕಗಳ ಸಾಧನೆ,
ಕು. ವರುಣ್ 10ನೇ ತರಗತಿ ತೇರ್ಗಡೆ, 
ಕು.ಹರಿಣಿ(ಇಂಜಿನಿಯರಿಂಗ್),  ಕು.ಅನನ್(ಬಿಕಾಂ) ಕು.ಶೇಷಸಿಂಹ (ಬಿಕಾಂ) ರವರು12ನೇ ತರಗತಿಯಿಂದ ಪದವಿ ಕಾಲೇಜುಗಳತ್ತ ನಡೆದುದು,
ಶ್ರೀ ಜಯಸಿಂಹರವರ ಮನೆ ಹೊಸ ರೂಪದೊಂದಿಗೆ ಕಂಗೊಳಿಸಿ ನಮಗೆಲ್ಲಾ ಸಂತಸ ನೀಡಿದ್ದು,
ಶ್ರೀ ಕೃಷ್ಣಮೂರ್ತಿ- ಶ್ರೀಮತಿ ಪದ್ಮಿನಿ ಕೃಷ್ಣಮೂರ್ತಿಯವರ ಅಮೆರಿಕ  ಯಾತ್ರೆ,
ಶ್ರೀ ನಾಗೇಂದ್ರ  ಕೃಷ್ಣಮೂರ್ತಿರವರು ಅಮೆರಿಕದಲ್ಲಿ ಪಿ. ಹೆಚ್. ಡಿ ಯೊಂದಿಗೆ ಡಾಕ್ಟರ್ ಆದದ್ದು,
ಶ್ರೀ ನಾರಾಯಣ-ಶ್ರೀಮತಿ ಜಯಂತಿ ರವರ ಜರ್ಮನಿ ಪ್ರವಾಸ,
ಇನ್ನೇನು ಬರಲಿರುವ 2016ರ  ವಾರ್ಷಿಕ ಸಭೆ.................................ಓಹ್...............
................ಎಲ್ಲರೂ ಹೀಗೆ ಸಂತಸಗಳನ್ನು ಸವಿಯುವಂತಾಗಲಿ..........
ಕು.ಅನಿಲ್ ಕಶ್ಯಪ್ ನಿಗೆ ಪತ್ರಿಕಾ ಅಕಾಡೆಮಿಯಿಂದ ಸನ್ಮಾನ